ಶ್ರೀ ಚನ್ನಿಗರಾಯ ಸ್ವಾಮಿ ಕಂಬೈನ್ಸ್ ಲಾಂಚನದಲ್ಲಿ ಪಿ. ಶೇಖರ್ ಗೌಡ ನಿರ್ಮಿಸುತ್ತಿರುವ ವಿ.ಎಂ. ಜಯಕಣ್ಣನ್ ನಿರ್ದೇಶನದ ಗೋಕುಲ ಕೃಷ್ಣ ಚಿತ್ರಕ್ಕೆ ರಾಜರಾಜೇಶ್ವರಿ ನಗರದ ಖಾಸಗಿ ಬಂಗಲೆ ಹಾಗೂ ಮಂಚಿನ ಬೆಲೆಯಲ್ಲಿ ನಾಯಕ ನಾಯಕಿಯೊಂದಿಗೆ ಅಭಿನಯಿಸಿದ ದೃಶ್ಯದೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ಈ ಚಿತ್ರದ ಛಾಯಗ್ರಹಣ ಎ. ವಿನೋದ್ ಭಾರತಿ, ಸಂಗೀತ ಎಸ್.ಎ. ರಾಜಕುಮಾರ್, ಸಂಕಲನ ಸಾಯಿ ಸುರೇಶ್, ನೃತ್ಯ ದೀನ-ಸದಾ, ಸಾಹಸ ಡಿಫ್ರೆಂಟ್ ಡ್ಯಾನಿ, ಸಹ ನಿರ್ದೇಶನ ರಾಜೇಶ್, ನಿರ್ವಹಣೆ ಸುಂದರಮ್, ಲಕ್ಷ್ಮಿ ನಾರಾಯಣ, ಕೃಷ್ಣಸ್ವಾಮಿ, ಸಹ ನಿರ್ಮಾಪಕರಾಗಿರುವ ಈ ಚಿತ್ರದ ಮುಂದಿನ ಚಿತ್ರೀಕರಣ ಗೋವ, ಆಗ್ರ, ರಾಜಸ್ತಾನ್, ಹಾಗೂ ಹೈದರಾಬಾದ್ ನಲ್ಲಿ ನಡೆಯಲಿದೆ. ತಾರಾಗಣದಲ್ಲಿ ಪ್ರಜ್ವಾಲ್, ಅನನ್ಯ, ದೊಡ್ಡಣ್ಣ, ಸಾದುಕೋಕಿಲ, ಜೈಜಗದೀಶ್, ಭವ್ಯ, ಸುರೇಶ್ ಚಂದ್ರ, ಕುರಿಗಳು ಪ್ರತಾಪ್, ಜಯಲಕ್ಷ್ಮಿ ಪಾಟಿಲ್, ಶಶಿಕಲಾ, ಸಂಗೀತ ಹಾಗೂ ಜಗದೀಶ್ ಪವರ್ ಅಭಿನಯಿಸಿದ್ದಾರೆ.